ಶನಿವಾರ, ಡಿಸೆಂಬರ್ 12, 2020

ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ- ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೀರಾಪೂರು,ತಾ||ಜಿ|| ರಾಯಚೂರು

ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ 

ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ

ಗ್ರಾಮ: ಮೀರಾಪೂರು                                                                       ಪಂಚಾಯತಿ: ಇಡಪನೂರು 

Board



ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ ಅಡಿಯಲ್ಲಿ ಎರಡನೇ ವಾರದ ವಿಶೇಷ ಕಾರ್ಯಕ್ರಮ ಮಕ್ಕಳಿಗೆ ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ ಈ ವಿಶೇಷ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀರಾಪೂರು ಇಲ್ಲಿ ಆಯೋಜಿಸಲಾಯಿತು.

HM
HM SULOCHANA

ಪೌಷ್ಟಿಕ ಆಹಾರದ ಪರಿಚಯ ಮಾಡಿಕೊಡುವ ಸಲುವಾಗಿ ಹಲವು ಬಗೆಯ ದವಸ ಧಾನ್ಯಗಳಾದ ಅಕ್ಕಿ, ರಾಗಿ, ಜೋಳ, ಸಜ್ಜೆ, ಗೋದಿ, ಹೆಸರು, ಉರುಳಿಕಾಳು, ಅಲಸಂದಿ, ಅಂಬ್ರೇಕಾಳು, ಮೆಟಿಗೆ ಕಾಳು, ಶೇಂಗಾ, ಕಡಲೆ ಇತ್ಯಾದಿ ಏಕದಳ ಹಾಗು ದ್ವಿದಳ ಧಾನ್ಯಗಳು, ಬಗೆ ಬಗೆಯ ತರಕಾರಿಗಳು, ಮೊಟ್ಟೆ, ಮಸಾಲೆ ಪದಾರ್ಥಗಳನ್ನು ಸಾಲು ಸಾಲಾಗಿ ತಟ್ಟೆಗಳಲ್ಲಿ ಎಲ್ಲ ಮಕ್ಕಳಿಗೂ ಕಾಣುವಂತೆ ಪ್ರದರ್ಶಿಸಲಾಯಿತು. ಪ್ರತಿ ಬಗೆಯ ಆಹಾರ ಪದಾರ್ಥಗಳಿಗೆ ಹೆಸರಿಸಿ ಮತ್ತು ಅವುಗಳ ಸೇವನೆಯಿಂದ ದೊರಕುವ ಪೋಷಕಾಂಶಗಳ ಹೆಸರುಗಳನ್ನೂ ಬರೆದು ಇಡಲಾಗಿತ್ತು. ಮುಖ್ಯ ಗುರುಗಳಾದ ಶ್ರೀಮತಿ ಸುಲೋಚನಾ ಇವರು ಕಾರ್ಯಕ್ರಮದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು. 



ಶಿಕ್ಷಕರಾದ ಶಾಂತಮೂರ್ತಿ ಹಿರೇಮಠ ಇವರು ಮಕ್ಕಳಿಗೆ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಲಿಪಿಡ್ಸ್, ವಿಟಮಿನ್ಸ್ ಮತ್ತು ಮಿನರಲ್ಸ್, ಮೈಕ್ರೋ ನ್ಯೂಟ್ರಿಯೆಂಟ್ಸ್, ನಾರು ಮತ್ತು ಶುದ್ಧ ನೀರಿನ ಬಗ್ಗೆ ಪರಿಚಯ ಮಾಡಿಕೊಟ್ಟು ಮತ್ತು ಯಾವ ಯಾವ ಪೋಷಕಾಂಶಗಳು ಯಾವ ಆಹಾರದ ಸೇವನೆಯಿಂದ ದೇಹಕ್ಕೆ ದೊರಕುತ್ತದೆ ಎಂಬುದನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು. 

ಇನ್ನೋರ್ವ ಶಿಕ್ಷಕರಾದ ಶ್ರೀ ಗಂಗಾಧರ ಎಂ ಎನ್ ಇವರು ಎಲ್ಲ ಬಗೆಯ ತರಕಾರಿಗಳನ್ನು ಪರಿಚಯಿಸಿ ಮತ್ತು ಅವುಗಳ ಹೆಸರು ಆಂಗ್ಲ ಭಾಷೆಯಲ್ಲಿ ಮತ್ತು ಆಡು ಭಾಷೆಯಲ್ಲಿ ಮಕ್ಕಳಿಂದ ಹೇಳಿಸಿ ಅವುಗಳಿಂದ ಯಾವ ಅಡುಗೆ ಮಾಡುವರು ಎಂದು ಚರ್ಚೆಯ ಮುಖಾಂತರ ಮಕ್ಕಳಿಂದಲೇ ಮಾಹಿತಿಯನ್ನು ಪಡೆದರು. 
ಇನ್ನು ವಿಶೇಷವಾಗಿ ಶ್ರೀ ನರಸಯ್ಯ ಹಿರಿಯ ಶಿಕ್ಷಕರು ಇವರು ನವ ಧಾನ್ಯಗಳಿಂದ ತಯಾರಿಸುವ ವಿಶೇಷ ಆರೋಗ್ಯಕರ ಆಹಾರಗಳಾದ ಜೋಳದ ಕಟಾಲಿ, ರಾಗಿ ಮುದ್ದೆ, ಕಾಳುಗಳಿಂದ ತಯಾರಿಸುವ ಸಾರು, ಅಂಬಲಿ, ರಾಗಿ ಗಂಜಿ, ವಿವಿಧ ಆರೋಗ್ಯಕರ ಪಾನೀಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟು ಅವುಗಳ ವಿಶೇಷತೆ ಕುರಿತು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ಮಕ್ಕಳು ಸಂತಸದಿಂದ ಪೋಷಕಾಂಶಗಳು ಮತ್ತು ಅವುಗಳಿಂದಾಗುವ ಪ್ರಯೋಜನಗಳು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಿ ದೇಹವನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿದುಕೊಂಡರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರ ಜೊತೆಗೆ ಮುಖ್ಯ ಅಡುಗೆಯವರು ಮತ್ತು ಸಹಾಯಕರು, ಅಂಗನವಾಡಿ ಸಹಾಯಕರು ಮತ್ತು ಪೋಷಕರು ಇದ್ದು ಮಾಹಿತಿ ಪಡೆದುಕೊಂಡರು. ಒಟ್ಟಾರೆಯಾಗಿ ಅರ್ಥಪೂರ್ಣವಾಗಿ ಈ ಅಭಿಯಾನವನ್ನು ಆಯೋಜಿಸಲಾಯಿತು.
ಧನ್ಯವಾದಗಳು.

ಸೋಮವಾರ, ಆಗಸ್ಟ್ 10, 2020

ನಿರಂತರ ಕಲಿಕೆ:ವಿದ್ಯಾಗಮ:(ಪ್ರತಿದಿನದ ಪ್ರಗತಿ)

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮೀರಾಪುರ)ಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಮನೆ ಭೇಟಿ ಮತ್ತು ವಠಾರದಲ್ಲಿ ಭೋಧನ ಕಾರ್ಯಕ್ರಮದ ವಿವರಗಳು ವೀಕ್ಷಿಸಲು ಈ ಲಿಂಕ್ ಬಳಸಿ. ವಠಾರ ಶಾಲೆ

Venue: 1. School campus ground

Venue: 2. Shri Anjaneya Swamy Temple

Venue: 3. Shri VEERABHADRESHWARA Temple

Venue: 4. Dargha Samudaya Bhavana

Ground
ವಠಾರ: ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ
@Sri Anjaneya Swamy Temple
 
Sri Anjaneya Swamy temple
Students house Corridor

ಶನಿವಾರ, ಜುಲೈ 18, 2020

ಗಣಿತ ಕಲಿಕಾ ಆಂದೋಲನ: ವ್ಯವಕಲನ



School Event Photo collection

2019-20 ನೇ ಸಾಲಿನ ಶಾಲಾ ಚಟುವಟಿಕೆಗಳು

7 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮ. 
ಮುಖ್ಯಗುರುಗಳಿಗೆ ಶಾಲಾ ಮುಖ್ಯ ಮಂತ್ರಿಗಳಿಂದ ಹೂ ವಿತರಣೆ 


ಪಾಲಕರ ಸಭೆ 

ಮಕ್ಕಳ ಮನೆ ಭೇಟಿ 

ಈ ಶಾಲೆಯ ಶಿಕ್ಷಕರು ರಾಜ್ಯಮಟ್ಟದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಷಯ ಮಂಡನೆ ಮಾಡುತ್ತಿರುವುದು.'


74th Republic day

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೀರಾಪೂರು. 74ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.